ರಾಕಿಂಗ್ ಸ್ಟಾರ್ ಯಶ್
ಅಭಿನಯದ ‘ಮಾಸ್ಟರ್ ಪೀಸ್’
ಚಲನಚಿತ್ರ ಬಿಡುಗಡೆಗೆ ಇನ್ನು
ಕೇವಲ ಎರಡು
ದಿನವಿರುವಾಗಲೇ
ಮಂಡ್ಯದಲ್ಲಿ ವಿಚಿತ್ರ
ಘಟನೆಯೊಂದು ನಡೆದಿದೆ.
ರೈತ ಸಂಘಟನೆಯ ಹೆಸರು
ಹೇಳಿಕೊಂಡು ಕೆಲವರು
ಯಶ್ ವಿರುದ್ದ
ಪಿತೂರಿಯನ್ನು ನಡೆಸಿದ್ದಾರೆ. ಯಶ್ ರೈತರ ಪರವಾಗಿ ಹಗುರವಾಗಿ
ಮಾತನಾಡಿದ್ದಾರೆ ಎಂದು ಮಂಡ್ಯ, ಮೈಸೂರು, ಹಾಸನ,
ಬೆಂಗಳೂರು, ಹುಬ್ಬಳ್ಳಿ, ರಾಮನಗರ ಮುಂತಾದ ಕಡೆಗಳಲ್ಲಿ
‘ಮಾಸ್ಟರ್ ಪೀಸ್’ ಚಲನಚಿತ್ರ ಬಿಡುಗಡೆಯಾಗುವ ದಿನ ಚಿತ್ರಮಂದಿರದ
ಎದುರು ಪ್ರತಿಭಟನೆ ಮಾಡುವುದಾಗಿ ಕರಪತ್ರ ಹಂಚಿದ್ದರು. ಈ ಹಿಂದೆ
ಇಲ್ಲಿನ ಚಲನಚಿತ್ರ ತಂಡವೊಂದು ಯಶ್ ವಿರುದ್ದ ಇದೇ ರೀತಿ ಪ್ರತಿಭಟನೆ
ನಡೆಸಿತ್ತು.
ಆದರೆ ಮಂಡ್ಯದ ರೈತ ಸಂಘ ಯಶ್ ಅವರ ಪರವಾಗಿ ದನಿಯೆತ್ತಿದೆ. ‘ನಾವು
ರಾಕಿಂಗ್ ಸ್ಟಾರ್ ಯಶ್ ಅವರ ವಿರುದ್ದವಾಗಿ ಯಾವುದೇ ಪ್ರತಿಭಟನೆ
ನಡೆಸುತ್ತಿಲ್ಲ. ಕೆಲವರು ರೈತ ಸಂಘಟನೆಯ ಹೆಸರನ್ನು
ಹಾಳುಗೆಡವುತ್ತಿದ್ದಾರೆ ಎಂದಿದ್ದಾರೆ. ಈ ರೀತಿಯಾಗಿ ಕರಪತ್ರ
ಹಂಚುತ್ತಿದ್ದವರನ್ನು ಮಂಡ್ಯದ ರೈತ ಸಂಘಟನೆ ಕರೆದು ಛೀಮಾರಿ
ಹಾಕಿದೆ.
“ಯಶ್ ಅವರು ಮೂಲತಃ ರೈತ ಕುಟುಂಬದ ಹುಡುಗ. ‘ಕಿರಾತಕ’
ಸೇರಿದಂತೆ
ಯಶ್
ನಟಿಸಿದ
ಅನೇಕ
ಚಲನಚಿತ್ರಗಳು
ರೈತರ
ಪರವಾಗಿಯೇ
ಇದೆ.
ಯಶ್
ಅವರ
ಏಳಿಗೆಯನ್ನು
ಸಹಿಸದ
ಮಂದಿ
ಈ
ರೀತಿ ಕುತಂತ್ರವನ್ನು ನಡೆಸುತ್ತಿದ್ದಾರೆ.” ಎಂಬುದು ಯಶ್
ಅಭಿಮಾನಿಗಳ ಅಭಿಪ್ರಾಯ...
.
credits: balkani.com